ಹಗೆಯ ಗೆಳೆಯ


ಜಯವು ಶಾಂತಿಯ ಶರಣ, ಭಾರತ-
ಪಾರತಂತ್ರ್ಯ ನಿವಾರಣಾ!
ಜಯ ಮಹಾತ್ಮಾ, ಜಯವು ಮೋಹನ,
ಪತಿತಜನ ಸಂಜೀವನಾ !


ಬೆಳಕು ಬಿದ್ದಿತು ಭರತಭುವಿಯಲಿ
ಜನ್ಮಿಸಲು ಗುರುಗಾಂಧಿಯು,
ಕಳಕಳನೆ ನಗೆಯೆದ್ದು ನಿಂತಿತು,
ಶಾಂತಿ-ಸೌಖ್ಯದ ನಾಂದಿಯು !


ಭರತಮಾತೆಯ ಪೂರ್ವಪುಣ್ಯವೆ
ಪುರುಷರೂಪವ ತಳೆಯಿತೋ,
ಕರಮಚಂದರ ಮನೆಯೊಳಾಡುತ
ಅರಿವನುಣ್ಣುತ ಬೆಳೆಯಿತೋ !


ಪುಣ್ಯ ಪುರುಷನ ತೆರೆದ ಕಂಗಳು
ಕಂಡವೈ ಜನದವನತಿ ;
ತನ್ನ ತಾಯ್‌ನೆಲ ಅನ್ನಿಗರ ವಶ-
ಅಣ್ಣ-ತಮ್ಮರ ದುರ್‍ಗತಿ !


ಪೊಡವಿ ತಮ್ಮದು, ದುಡಿಮೆ ತಮ್ಮದು,
ಕಡೆಯಿರದ ಸಿರಿ ತಮ್ಮದು….
ಒಡಲಿಗನ್ನವು ಉಡಲು ವಸನವು
ಇರದೆ ಜನ ಬಾಯ್‌ಬಿಡುವುದು !


ನೋಡಿದನು ಗುರುಗಾಂಧಿದೇವನು-
ನಾಡಿಗರ ಪರಿತಾಪವ ;
ಓಡಿಸುವೆ ಪರದಾಸ್ಯಭೂತವ-
ನೆಂದು ಹಿಡಿದನು ಚಾಪವ!


ಕತ್ತಿಯಿಲ್ಲದ ನೆತ್ತರಿಲ್ಲದ
ಸತ್ಯಸಮರದ ನೀತಿಯ-
ಒತ್ತಿಸಾರುತ ಕಿತ್ತಿಸಿದನಿವ
ಹಗೆಯ ಹಿಂಸೆಯ ಭೀತಿಯ!


ಭರತಧರಣಿಯೊಳೆಲ್ಲ ತಿರುಗುತ
ಮುರಲಿಯೂದಿದ ಮೋಹನ;
ಕುರಿಜನರು ನರಹರಿಗಳಾದರು,
ಅರಿತರೋ ತಮ್ಮಾಳ್‌ತನ !


ಹಗೆಯು ಸೋತನು, ಶರಣುಬಂದನು,
ಜಗದ ಗುರು ನೀನೆಂದನು ;
ನಗುತ ಗಾಂಧಿಯು ಹಗೆಯನುಪ್ಪುತ
ಗೆಳೆಯನಾಗಿಯೆ ನಿಂದನು.

೧೦
ಇಂದು ಗಾಂಧಿಯ ಗೆಯ್ಮೆಯಿಂದಲಿ
ಬಂಧಮುಕ್ತಳು ಭಾರತಿ,
ಎಂದೆ ಕಂದರು ಸೇರಿ ಗಾಂಧಿಗೆ
ಬೆಳಗುವೆವು ನಾವಾರತಿ!

೧೧
ಜಯವು ಶಾಂತಿಯ ಶರಣ ಭಾರತ-
ಪಾರತಂತ್ರ್ಯನಿವಾರಣಾ !
ಜಯ ಮಹಾತ್ಮಾ ಜಯವು ಮೋಹನ
ಪತಿತಜನ ಸಂವಾಹನಾ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಚ್.ವಿ. ಸಾವಿತ್ರಮ್ಮ ಅವರ ಕತೆಗಳು
Next post ಗಿಳಿವಿಂಡು

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys